@Kiratamuryhi, ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿ, ತೀರ್ಥ ಮಂಟಪದ ಶಿಲಾನ್ಯಾಸ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಶ್ರೀ ಕ್ಷೇತ್ರ ಮೈರಲ್ಕೆ ಯಲ್ಲಿ 28 ಜನವರಿ 2021ರಂದು ಆಲಂಬಾಡಿ ಶ್ರೀ ಪದ್ಮನಾಭ ತಂತ್ರಿ ನೀಲೇಶ್ವರ ನೇತೃತ್ವದಲ್ಲಿ ದೇವಳದ ಗರ್ಭಗುಡಿ ಮತ್ತು ತೀರ್ಥ ಮಂಟಪಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜರುಗಿ,
ಪವಿತ್ರಪಾಣಿ ಶ್ರೀ ಮೋಹನ್ ಕರ್ಮುಣ್ಣಾಯ, ಶ್ರೀ ಹರಿಪ್ರಸಾದ ಇರ್ವತ್ರಾಯ ಮತ್ತಿತರೆ ಅರ್ಚಕ ವರ್ಗ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಛಂದಗಾಣಿಸಿಕೊಟ್ಟರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ, ಮಾಜಿ ಶಾಸಕ ವಸಂತ ಬಂಗೇರ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಶ್ರೀಮತಿ ಮಮತಾ ಶೆಟ್ಟಿ, ಶ್ರೀ ನಾರಾಯಣ ಸುವರ್ಣ, ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ವೃಷಭ ಆರಿಗ, ಶ್ರೀ ಜಯರಾಮ್ ಶೆಟ್ಟಿ , ಶ್ರೀ ಗೋಪಾಲ್ ಶೆಟ್ಟಿ, ಶ್ರೀ ಚಂದ್ರಹಾಸ ಕೇದೆ, ಶ್ರೀ ಗೋಪಿನಾಥ್ ನಾಯಕ್, ಜೀರ್ಣೋದ್ಧಾರ ಸಮಿತಿ ಸರ್ವ ಸದಸ್ಯರು, ಭಜಕರು ಊರವರು ಹಾಜರಿದ್ದರು.
Mangalore Samachar
Mangalore-Samachar's video: Kiratamuryhi
21
1